ಶ್ರೀ ಗುರುಭ್ಯೋ ನಮಃ।
ಪರಮಗುರುಭ್ಯೋ ನಮಃ।
ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೋ ನಮಃ।
ಪ್ರತಿದಿನ ಸರ್ವಮೂಲ ಗ್ರಂಥಗಳ ಒಂದೊಂದು ಶ್ಲೋಕಗಳು
ಶ್ರೀ ಮನ್ಮಹಾಭಾರತ ತಾತ್ಪರ್ಯ ನಿರ್ಣಯ
 
दृष्ट्वा स चेतनगणान् जठरे शयानान्
आनन्दमात्रवपुषः स्मृतिविप्रमुक्तान्।
ध्यानं गतान् सृतिगतांश्च सुषुप्तिसंस्थान्
ब्रम्हादिकान् कलिपरान् मनुजांस्तथैक्षत्।।

ಶ್ರೀ ಹರಿಯು ತನ್ನ ಉದರದಲ್ಲಿರುವ ನಾನಾ ಬಗೆಯ ಜೀವರಾಶಿಯನ್ನು ಈಕ್ಷಿಸಿದ. ಮುಕ್ತರಾಗಿ ಆನಂದ ಸ್ವರೂಪರಾದ ಉತ್ತಮ ಜೀವರು ಧ್ಯಾನಾವಸ್ಥೆಯಲ್ಲಿ, ಮಧ್ಯಮ ಹಾಗೂ ಅಧಮ ಮುಕ್ತರು ಯಾವ ಅವಸ್ಥೆಯಲ್ಲಿದ್ದರೋ ಹಾಗೆಯೆ ಈಕ್ಷಿಸಿದ. ಅಮುಕ್ತರಾದ ರುದ್ರಾದಿ ಉತ್ತಮ ಜೀವರು, ಮಧ್ಯಮ ಜೀವರು, ಕಲಿ ಪರ್ಯಂತ ಅಧಮ ಜೀವರು ಸುಷುಪ್ತಿಯಲ್ಲೂ ಇರುವುದನ್ನು ಕಂಡ.

ಶ್ರೀಮತ್ಸುಧೀಂದ್ರ ತೀರ್ಥ ಗುರ್ವಂತರ್ಗತ ಭಾರತೀಪತಿ ಮುಖ್ಯಪ್ರಾಣಾಂತರ್ಗತ ಶ್ರೀ ವೇದವ್ಯಾಸ ಪ್ರಿಯತಾಮ್
✍️ ಶೀಘ್ರಮೋದ

Comments